ಸ್ಲಮ್ಮಿನಲ್ಲಿ ಹುಟ್ಟುವ ಸುಂದರ ಪ್ರೇಮಕತೆ ‘ಪ್ರೇಮಾಸುರ’
Posted date: 06 Fri, May 2016 – 09:00:37 AM

ಪೌರ ಕಾರ್ಮಿಕ ಹುಡುಗ, ಮನೆಗೆಲಸದ ಹುಡುಗಿ... ಈ ಇಬ್ಬರ ನಡುವೆ ಹೇಗೆ ಪ್ರೇಮಾಂಕುರವಾಗುತ್ತದೆ? ಇಬ್ಬರ ಪ್ರೀತಿಯ ನಡುವೆ ಏನೆಲ್ಲಾ ಅಡ್ಡಿ ಆತಂಕಗಳು ಎದುರಾಗುತ್ತವೆ? ಕಡೆಗೆ ಈ ಇಬ್ಬರೂ ತಂತಮ್ಮ ಪ್ರೀತಿಯನ್ನು ದಕ್ಕಿಸಿಕೊಳ್ತಾರಾ? - ಹೀಗೊಂದು ವಿನೂತನ ಕಥಾವಸ್ತುವೊಂದನ್ನೇ ಬಂಡವಾಳವಾಗಿಸಿಕೊಂಡು ಸಿನಿಮಾ ತಯಾರಾಗುತ್ತಿದೆ. ಈ ಚಿತ್ರದ ಹೆಸರು ‘ಪ್ರೇಮಾಸುರ’.
    ಪಣಿರಾಮಚಂದ್ರ, ಮಿಲನ ಪ್ರಕಾಶ್, ಬಿ. ಗೋಪಾಲ್ ಮುಂತಾದ ನಿರ್ದೇಶಕರೊಂದಿಗೆ ಸಹಾಯಕರಾಗಿ ದುಡಿದು ಅನುಭವ ಪಡೆದಿರುವ ನಾಗೇಶ್ ಕ್ಯಾಲನೂರು ಪ್ರಥಮವಾಗಿ ನಿರ್ದೇಶಿಸುತ್ತಿರುವ ಚಿತ್ರವಿದು. ಈ ಚಿತ್ರಕ್ಕಾಗಿ ಬೆಳಗಾವಿಯ ಶೀತಲ್ ರಾಜ್ ಮತ್ತು ಹುಬ್ಬಳ್ಳಿಯ ಮೃದುಲಾರನ್ನು ನಾಯಕ, ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅದಾಗಲೇ ಒಂದು ಹಾಡನ್ನು ಹೊರತುಪಡಿಸಿ ಮಿಕ್ಕೆಲ್ಲಾ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಉಳಿದಿರುವ ಇನ್ನೊಂದು ಹಾಡಿಗಾಗಿ ಹೈದ್ರಾಬಾದಿನಲ್ಲಿ ವಿಶೇಷವಾದ ಸೆಟ್ ನಿರ್ಮಿಸಲಾಗಿದೆ. ಪ್ರೇಮ್ ರಕ್ಷಿತ್ ನೃತ್ಯ ನಿರ್ದೇಶನದಲ್ಲಿ ಈ ಹಡಿನ ಚಿತ್ರೀಕರಣ ಮುಂದಿನ ವಾರ ನೆರವೇರಲಿದೆ.
    ಹರಿಹರಪುರ ನಾಗರಾಜ್, ಕುಂತು ನಾಗನೂರು ಮತ್ತು ರಘು ಕ್ಯಾಲನೂರು ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶ್ರೀ ಹರ್ಷ ಸಂಗೀತ, ರವಿ ಕಿಶೋರ್ ಕ್ಯಾಮೆರಾ, ಶಿವಪ್ರಸಾದ್ ಯಾದವ್ ಸಂಕಲನ, ಸಂಭಾಷಣೆ ಮತ್ತು ಗೀತಸಾಹಿತ್ಯ ನಾಗಮೂರ್ತಿ ರಚಿಸಿರುವ ಈ ಚಿತ್ರದ ಕಥೆ, ಚಿತ್ರಕಥೆ ಜೊತೆಗೆ ನಿರ್ದೇಶನದ ಹೊಣೆಯನ್ನು ನಾಗೇಶ್ ಕ್ಯಾಲನೂರು ವಹಿಸಿಕೊಂಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed